Slide
Slide
Slide
previous arrow
next arrow

ರಾಜ್ಯಮಟ್ಟದ ನಿಬಂಧ ಸ್ಪರ್ಧೆ: ಸಿವಿಎಸ್‌ಕೆಯ ಸಾಕ್ಷಿ ಪ್ರಥಮ

300x250 AD

ಕುಮಟಾ:ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 98ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀ ಸತ್ಯಸಾಯಿ ಸೇವಾಕ್ಷೇತ್ರ ಸಂಸ್ಥೆ ಇವರು ಹಮ್ಮಿಕೊಂಡ ರಾಜ್ಯಮಟ್ಟದ ಇಂಗ್ಲೀಷ್ ನಿಬಂಧ ಸ್ಪರ್ಧೆಯಲ್ಲಿಇಲ್ಲಿನ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್, ಸಿವಿಎಸ್‌ಕೆ ಪ್ರೌಢಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಕೆ.ಎಸ್. ಇವಳ ‘ಟೈಮ್ ವೇಸ್ಟ್ ಈಸ್ ಲೈಫ್ ವೇಸ್ಟ್’ ನಿಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ.

ಭಾರತಾದ್ಯಂತ ಸುಮಾರು 3.75 ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕ (ಉತ್ತರಭಾಗ) ಪ್ರೌಢಶಾಲಾ ವಿಭಾಗದಲ್ಲಿಈಕೆಯ ನಿಬಂಧವು ಪ್ರಥಮ ಸ್ಥಾನ ಮುಡಿಗೇರಿಸಿಕೊಳ್ಳುವುದರ ಜೊತೆಗೆ ಶಾಲೆಯಕೀರ್ತಿಯನ್ನು ಮತ್ತಷ್ಟು ಎತ್ತರಿಸಿದೆ. ಬಹುಮಾನವು ಪ್ರಶಸ್ತಿ ಪತ್ರ, ಚಿನ್ನದ ಪದಕ, ಹಾಗೂ ನಗದನ್ನು ಒಳಗೊಂಡಿದೆ. ಇವಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top